• About us
  • Advertise with us
  • Reach us
Thursday, August 11, 2022
News1Kannada
LIVE
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
No Result
View All Result
News1Kannada
LIVE
No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
Home ರಾಜಕೀಯ

ಪಂಚರಾಜ್ಯ ಚುಣಾವಣೆ: ಫೆ.10ರಿಂದ 7 ಹಂತಗಳಲ್ಲಿ ಮತದಾನ; ಮಾ.10ಕ್ಕೆ ಫಲಿತಾಂಶ

ದೇಶದಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಪ್ರತಿನಿತ್ಯ ಹತ್ತಾರು ಸಾವಿರಗಟ್ಟಲೇ ಕೊರೋನಾ ಕೇಸ್​​ ಪತ್ತೆಯಾಗುತ್ತಿವೆ.

Share on FacebookShare on TwitterShare on Whatsapp

ದೇಶದಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಪ್ರತಿನಿತ್ಯ ಹತ್ತಾರು ಸಾವಿರಗಟ್ಟಲೇ ಕೊರೋನಾ ಕೇಸ್​​ ಪತ್ತೆಯಾಗುತ್ತಿವೆ. ಇಂತಹ ಹೊತ್ತಲೇ ಕೇಂದ್ರ ಚುನಾವಣಾ ಆಯೋಗ ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯೂ 7 ಹಂತಗಳಲ್ಲಿ ನಡೆಯಲಿದೆ.

ಫೆಬ್ರವರಿ 10ನೇ ತಾರೀಕಿನಿಂದ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಹಾಗೆಯೇ ಮಾರ್ಚ್​​ 10ನೇ ತಾರೀಕು ಫಲಿತಾಂಶ ಹೊರ ಬೀಳಲಿದೆ ಎಂದು ತಿಳಿಸಿದೆ.

ದೇಶದಲ್ಲೇ ಅತೋ ದೊಡ್ಡ ರಾಜ್ಯ ಉತ್ತರ ಪ್ರದೇಶ 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಗೋವಾ (40), ಪಂಜಾಬ್ (117), ಉತ್ತರಾಖಂಡ (70), ಮಣಿಪುರ (60) ರಾಜ್ಯಗಳ ವಿಧಾನಸಭೆ ಚುನಾವಣೆಯೂ ಹಲವು ಹಂತಗಳಲ್ಲಿ ನಡೆಯಲಿದೆ.

ಪಂಚರಾಜ್ಯ ಚುನಾವಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯ ಆಯುಕ್ತ ಸುಶೀಲ್ ಚಂದ್ರ ಅವರು, ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಎಲೆಕ್ಷನ್​​ ನಡೆಸುತ್ತೇವೆ ಎಂದರು. ಐದು ರಾಜ್ಯಗಳ 690 ಕ್ಷೇತ್ರಗಳಿಗೆ ಚುನಾವಣೆ ನಡೆಲಿದೆ. ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವುದು ಕರ್ತವ್ಯ. ಕೊರೊನಾ ಕಾರಣದಿಂದ ಚುನಾವಣೆ ನಡೆಸುವುದು ಸವಾಲಾಗಿದೆ ಎಂದು ಹೇಳಿದರು.

ಕಠಿಣ ಪರಿಸ್ಥಿತಿಯಲ್ಲೂ ಚುನಾವಣೆ ನಡೆಸುವುದು ನಮ್ಮ ಕರ್ತವ್ಯ. ಮುನ್ನೆಚ್ಚರಿಕೆ ನಿಯಮಗಳೊಂದಿಗೆ ಚುನಾವಣೆ ನಡೆಸಲು ತೀರ್ಮಾನಿಸಿದೆ. ಕೊವೀಡ್ ಸೇಫ್ ಎಲೆಕ್ಷನ್ ನಡೆಸಲಾಗುವುದು. ಹೆಚ್ಚು ಜನರು ಮತದಾನದಲ್ಲಿ ಭಾಗುಯಾವಂತೆ ಮಾಡಲಾಗುವುದು. ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಲಾಗಿದೆ. ಗೃಹ ಇಲಾಖೆ, ಆರೋಗ್ಯ ಇಲಾಖೆ, ರಾಜಕೀಯ ಪಕ್ಷಗಳ ಜೊತೆಗೆ ಸಭೆ ನಡೆಸಿದೆ.

ರಾಜ್ಯ ಸರ್ಕಾರದ ಹಲವು ಅಧಿಕಾರಿಗಳ ಜೊತೆಗೆ ಸಭೆ ನಡೆದಿದೆ. ಅವರಿಂದ ಹಲವು ಸಲಹೆಗಳನ್ನು ಪಡೆಯಲಾಗಿದೆ ಎಂದರು.
ಐದು ರಾಜ್ಯಗಳಲ್ಲಿ ಈ ಬಾರಿ 24.5 ಲಕ್ಷ ಹೊಸ ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಎಲ್ಲ ಮತದಾನ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೆಳ ಮಹಡಿಯಲ್ಲಿ ಮತದಾನ‌ ಕೇಂದ್ರಗಳಿರಲಿದೆ. ಸ್ಯಾಜಿಟೈಜರ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮತದಾನ ಕೇಂದ್ರಗಳಿಗೆ ಜನರ ಸಂಖ್ಯೆ ಇಳಿಕೆ ಮಾಡಿದೆ. 1500 ರಿಂದ 1250ಕ್ಕೆ ಇಳಿಕೆ ಮಾಡಿದೆ. ಜನಸಂದಣಿ ತಡೆಯಲು ಹೆಚ್ಚು ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಭ್ಯರ್ಥಿಗಳು ಆನ್ಲೈನ್ ನಾಮಪತ್ರ ಸಲ್ಲಿಕೆ ಮಾಡಬಹುದು. ಕೊವೀಡ್ ರೋಗಿಗಳು ಅಂಚೆ ಮತದಾನ ಮಾಡಬಹುದು. ಐದು ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮತದಾನ ಕೇಂದ್ರಗಳಿರಲಿದೆ. ಕೇಂದ್ರದಿಂದ 900 ಚುನಾವಣಾ ವೀಕ್ಷಕರು ಇರಲಿದ್ದಾರೆ. 25 ಲಕ್ಷದಿಂದ 40ಕ್ಕೆ ಚುನಾವಣಾ ವೆಚ್ಚ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ತಕ್ಷಣದಿಂದಲೆ ಪಂಚರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಕ್ರಿಮಿನಲ್ ಹಿನ್ನಲೆ ಹೊಂದಿರುವ ಅಭ್ಯರ್ಥಿಗಳ ಮಾಹಿತಿ ಪ್ರಕಟಿಸಬೇಕು. ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಕಾರಣಗಳನ್ನು ತಿಳಿಸಬೇಕು. ಜನರಿಗೆ ಅಭ್ಯರ್ಥಿಗಳ ಮಾಹಿತಿ ನೀಡಬೇಕು. ಡಬಲ್ ಡೋಸ್ ವ್ಯಾಕ್ಸಿನ್ ಆದ ಸಿಬ್ಬಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಸಿಬ್ಬಂದಿಗಳನ್ನು ಕೊವೀಡ್ ವಾರಿಯರ್ಸ್ ಎಂದು ಘೋಷಿಸಲಾಗಿದೆ. ಹೀಗಾಗಿ ಅವಶ್ಯಕತೆ ಇದ್ದವರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದರು.

Related Stories

ರಾಜಕೀಯ

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022
ಟಾಪ್-ನ್ಯೂಸ್

ನಿಗಮ‌ ಮಂಡಳಿಗಳ ಅಧ್ಯಕ್ಷರ ಬದಲಾವಣೆ ಬಗ್ಗೆ ಸುಳಿವು ನೀಡಿದ ಸಿಎಂ

July 12, 2022
ಟಾಪ್-ನ್ಯೂಸ್

APMC ಚುನಾವಣೆ ಮೀಸಲಾತಿಯನ್ನ ನ್ಯಾಯಯುತವಾಗಿ ಮಾಡಿಲ್ಲ- ಬೀರಿಹುಂಡಿ ಬಸವಣ್ಣ ಆರೋಪ

March 19, 2022
ಟಾಪ್-ನ್ಯೂಸ್

ಚಾಣಕ್ಯನ ಪ್ರತಿಪಾದನೆ ಮೂಲಕ ಸಂಪುಟದಲ್ಲಿ ಸ್ಥಳೀಯರಿಗೆ ಅವಕಾಶ ಕೊಡಿ-ರಾಮದಾಸ್

March 19, 2022
Next Post

ಕುದುರೆ ಜೊತೆ ಸಲ್ಮಾನ್​ ಖಾನ್​ ಫೋಟೋಶೂಟ್.. ಫ್ಯಾನ್ಸ್​ ಕಮೆಂಟ್ ನೋಡಿ ಸ್ಟಾರ್​ ನಟ ಶಾಕ್

Discussion about this post

Recent News

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6

Follow us

  • Trending
  • Comments
  • Latest

ತೆಲುಗು ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು..

November 3, 2021

ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್

November 22, 2021

ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

November 21, 2021

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

November 27, 2021

Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ

0

WhatsApp: ಆಗಸ್ಟ್​ನಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನ ಬ್ಯಾನ್​ ಮಾಡಿದ ವಾಟ್ಸ್ಆ್ಯಪ್!

0

ನಾಗ ಚೈತನ್ಯರ ಅತಿಯಾದ ಪೊಸೆಸಿವ್​ನೆಸ್​​ನಿಂದಲೇ ಸಮಂತಾ ಡಿವೋರ್ಸ್​​ಗೆ ಮುಂದಾದರಾ? ಅಸಲಿ ಕಾರಣವೇನು?

0

Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

0

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
  • About us
  • Advertise with us
  • Reach us
Call us: 0821-4266061

Copyright © 2021 UVS Media Private Limited.

No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos

Copyright © 2021 UVS Media Private Limited.

error: