• About us
  • Advertise with us
  • Reach us
Tuesday, August 9, 2022
News1Kannada
LIVE
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
No Result
View All Result
News1Kannada
LIVE
No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
Home ಟಾಪ್-ನ್ಯೂಸ್

ಕೇರಳದಲ್ಲಿ ನೊರೊವೈರಸ್ ಹಾವಳಿ: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ

ನೊರೊವೈರಸ್ ಸೋಂಕಿಗೆ ನಿರ್ದಿಷ್ಟ ಲಕ್ಷಣ ಇಲ್ಲದಿದ್ದರೂ ಅತಿಸಾರ ಹಾಗೂ ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕು ಎಂದು ರಾಜ್ಯ ಸರ್ಕಾರವು ಸೂಚಿಸಿದೆ.

Share on FacebookShare on TwitterShare on Whatsapp

ಬೆಂಗಳೂರು: ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ನೊರೊವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳ ಗಡಿಭಾಗದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲು ಆರೋಗ್ಯ ಇಲಾಖೆಯು ಜಿಲ್ಲಾ ವೈದ್ಯಾಧಿಕಾರಿಗಳಿಗೆ (ಡಿಎಚ್​ಒ) ಸೂಚನೆ ನೀಡಿದೆ. ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ನೂರೊವೈರಸ್‌ ಸೋಂಕಿನಿಂದ ಕಾಲರಾದಂತೆ ಅತಿಸಾರವಾಗಿ, ದೇಹವು ತೀವ್ರ ನಿರ್ಜಲೀಕರಣದಿಂದ ಬಳಲುತ್ತದೆ. ನೊರೊವೈರಸ್ ಸೋಂಕಿಗೆ ನಿರ್ದಿಷ್ಟ ಲಕ್ಷಣ ಇಲ್ಲದಿದ್ದರೂ ಅತಿಸಾರ ಹಾಗೂ ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕು. ಸೋಂಕಿನ ಬಗ್ಗೆ ಗಮನಿಸಲು ಜಿಲ್ಲೆಗೆ ಒಬ್ಬ ವೈದ್ಯರನ್ನು ನೇಮಕ ಮಾಡಿ ನಿರ್ವಹಣೆಗೆ ಗಮನ ಹರಿಸಬೇಕು. ವೈದ್ಯರ ಹೆಸರನ್ನು ಸಹ ಆರೋಗ್ಯ ಇಲಾಖೆಯ ನಿರ್ದೇಶಕರ ಗಮನಕ್ಕೆ ತರಬೇಕು ಎಂದು ಸರ್ಕಾರವು ಸೂಚಿಸಿದೆ.

ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಬೇಕು. ಪರೀಕ್ಷೆಗೆ ಒಳಪಡಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಸೋಂಕಿತರು, ಸಂಪರ್ಕಿತರು ಬಳಸಿದ ವಸ್ತುಗಳನ್ನು ಬಳಸಬಾರದು. ಹೋಟೆಲ್, ಕ್ಯಾಂಟೀನ್‌ಗಳಲ್ಲಿ ಬಿಸಿನೀರು ಬಳಕೆಗೆ ಸೂಚನೆ ನೀಡಬೇಕು. ತೆರೆದ ಬಾವಿ, ಕೆರೆ ನೀರನ್ನು ಶುದ್ಧೀಕರಿಸಿಯೇ ಬಳಸಬೇಕು. ಸಂಶಯಾಸ್ಪದ ಪ್ರಕರಣ ಕಂಡುಬಂದಲ್ಲಿ ಮಾಹಿತಿ ನೀಡಬೇಕು ಎಂದು ಕೋರಲಾಗಿದೆ.

ಕೇರಳದ ವಯಾನಾಡಿನಲ್ಲಿ 13 ಜನರಲ್ಲಿ ನೂರೊವೈರಸ್ ಸೋಂಕು ಕಾಣಿಸಿಕೊಂಡಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಆಚರಣೆಗೆ ತರಬೇಕೆಂದು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿನ ಮುಖ್ಯ ಅಂಶಗಳು ಇವು.

1. ನೂರೋ ವೈರಸ್ ಕಾಯಿಲೆಯು ಕಾಲರಾದಂತೆ ಅತಿಸಾರ ಮತ್ತು ತೀವ್ರ ನಿರ್ಜಲೀಕರಣ ಆಗಿರುತ್ತದೆ. ಅತಿಸಾರ ಬೇಧಿಗೆ ನೀಡುವ ಚಿಕಿತ್ಸೆ ನೀಡಬೇಕು
2. ಈ ವೈರಸ್ ನಾನ್ ಸ್ಪೆಸಿಫಿಕ್ ಆಗಿದ್ದು ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕು
3. ಜಿಲ್ಲೆಗೆ ಒಬ್ಬ ಪಿಸಿಷಿಯನ್ ನೇಮಕ ಮಾಡಿ ಸೂಕ್ತ ನಿರ್ವಹಣೆ ಮಾಡುವುದು. ಸದರಿ ಅವರ ಹೆಸರು ಕೂಡ ನಿರ್ದೇಶಕರ ಗಮನಕ್ಕೆ ತರುವುದು
4. ಎಲ್ಲಾ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸುವುದು. ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದು. ಕುಡಿಯಲು ಯೊಗ್ಯವಿಲ್ಲವೆಂದು ದೃಢೀಕರಿಸಿದರೆ ಕ್ಲೋರಿನೇಷನ್ ಮಾಡಿಸುವುದು
5. ಕುಡಿಯುವ ನೀರನ್ನು ಕಲುಷಿತಗೊಳಿಸುವ, ಕುಡಿಯುವ ನೀರಿನ ಪೂರೈಕೆಯಲ್ಲಿನ ದೋಷಗಳನ್ನು ಸ್ಥಳೀಯ ಸಂಸ್ಥೆಗಳು ಸರಿಪಡಿಸುವುದು. ಕುಡಿಯುವ ನೀರಿನ ಪೈಪುಗಳು ಚರಂಡಿ ಮೂಲಕ ಹಾದು ಹೋಗದಂತೆ ಕ್ರಮ ವಹಿಸುವುದು
6. ರಸ್ತೆಬದಿಗಳಲ್ಲಿ ಮಾರುವ ತಿನಿಸು, ಹಣ್ಣು ಹಂಪಲುಗಳನ್ನು ತಿನ್ನದಂತೆ ಜಾಗೃತಗೊಳಿಸಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು
7. ಸೊಂಕಿತ ವ್ಯಕ್ತಿಗಳ ನೇರ ಸಂಪರ್ಕ ಮತ್ತು ಸೊಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಸಂಸ್ಕರಿಸದೆ ಬಳಸದಂತೆ ತಿಳಿಸುವುದು
8. ಸಂಶಯಾಸ್ಪದ ಪ್ರದೇಶದ ಹೊಟೆಲ್ ಮತ್ತು ಕ್ಯಾಂಟೀನ್​ಗಳಲ್ಲಿ ಬಿಸಿನೀರು ಬಳಸಲು ಸೂಚಿಸುವುದು
9. ತೆರೆದ ಬಾವಿ ಮತ್ತು ಕೆರೆ ಕುಂಟೆಗಳ ನೀರನ್ನು ಗೃಹೋಪಯೋಗಕ್ಕೆ ಬಳಸಿದರೆ ಕ್ಲೋರೇನೆಷನ್ ಮಾಡಿಯೇ ಬಳಸಬೇಕು
10. ಜಿಲ್ಲೆಗಳಲ್ಲಿ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಲ್ಲಿ ನಿರ್ದೇಶಕರ ಗಮನಕ್ಕೆ ತರುವುದು

Related Stories

ಟಾಪ್-ನ್ಯೂಸ್

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022
ಟಾಪ್-ನ್ಯೂಸ್

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022
ಟಾಪ್-ನ್ಯೂಸ್

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
ಟಾಪ್-ನ್ಯೂಸ್

ನಿಗಮ‌ ಮಂಡಳಿಗಳ ಅಧ್ಯಕ್ಷರ ಬದಲಾವಣೆ ಬಗ್ಗೆ ಸುಳಿವು ನೀಡಿದ ಸಿಎಂ

July 12, 2022
Next Post

ಇಂದು ಅಂಬರೀಷ್​ ಪುಣ್ಯತಿಥಿ ಅಂಬಿ ಇಲ್ಲದೆ ಕಳೆಯಿತು ಮೂರು ವರ್ಷ

Discussion about this post

Recent News

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6

Follow us

  • Trending
  • Comments
  • Latest

ತೆಲುಗು ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು..

November 3, 2021

ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್

November 22, 2021

ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

November 21, 2021

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

November 27, 2021

Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ

0

WhatsApp: ಆಗಸ್ಟ್​ನಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನ ಬ್ಯಾನ್​ ಮಾಡಿದ ವಾಟ್ಸ್ಆ್ಯಪ್!

0

ನಾಗ ಚೈತನ್ಯರ ಅತಿಯಾದ ಪೊಸೆಸಿವ್​ನೆಸ್​​ನಿಂದಲೇ ಸಮಂತಾ ಡಿವೋರ್ಸ್​​ಗೆ ಮುಂದಾದರಾ? ಅಸಲಿ ಕಾರಣವೇನು?

0

Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

0

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
  • About us
  • Advertise with us
  • Reach us
Call us: 0821-4266061

Copyright © 2021 UVS Media Private Limited.

No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos

Copyright © 2021 UVS Media Private Limited.

error: