• About us
  • Advertise with us
  • Reach us
Thursday, August 11, 2022
News1Kannada
LIVE
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
No Result
View All Result
News1Kannada
LIVE
No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
Home ವಿದೇಶ

“PM ಕೇರ್ಸ್ ನಿಧಿಗೆ ಜಮಾ ಮಾಡಿದ ದುಡ್ಡು ಎಲ್ಲಿ ಹೋಗುತ್ತಿದೆ ಎನ್ನುವುದು ನಮಗೆ ಗೊತ್ತಿಲ್ಲ”

ಮಾಹಿತಿ ಹಕ್ಕು ಕಾಯ್ದೆಯನ್ನು ಬುಡಮೇಲು ಮಾಡಲಾಗುತ್ತಿರುವ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಂ.ಬಿ.ಲೋಕೂರ್ ಅವರು ಪಿಎಂ ಕೇರ್ಸ್ ನಿಧಿಯಲ್ಲಿನ ಹಣದ ಕುರಿತು ಮಾಹಿತಿ ಕೊರತೆಯನ್ನು ನಿದರ್ಶನವಾಗಿ ಉಲ್ಲೇಖಿಸಿದ್ದಾರೆ ಎಂದು livelaw.in ವರದಿ ಮಾಡಿದೆ.

Share on FacebookShare on TwitterShare on Whatsapp

ಮಾಹಿತಿ ಹಕ್ಕು ಕಾಯ್ದೆಯು ಜಾರಿಗೊಂಡು 16 ವರ್ಷಗಳಾಗಿರುವ ಸಂದರ್ಭದಲ್ಲಿ ‘ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್ಫಾರ್ಮೇಷನ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನ್ಯಾ.ಲೋಕೂರ್, ಸಾಮಾನ್ಯ ಪ್ರಜೆಗಳು ಮತ್ತು ದೊಡ್ಡ ಉದ್ಯಮಿಗಳು ದೇಣಿಗೆಯಾಗಿ ನೀಡಿರುವ ಕೋಟ್ಯಂತರ ರೂ.ಗಳನ್ನು ಹೇಗೆ ವೆಚ್ಚ ಮಾಡಲಾಗುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ಲಭ್ಯವಾಗಿಸಿಲ್ಲವೇಕೆ ಎಂದು ಪ್ರಶ್ನಿಸಿದರು.

‘PM cares ನಿಧಿಗೆ ಜಮಾ ಮಾಡಿದ ದುಡ್ಡು ಎಲ್ಲಿಗೆ ಹೋಗುತ್ತಿದೆ ಎನ್ನುವುದು ನಮಗೆ ಗೊತ್ತಿಲ್ಲ. PM cares ನಿಧಿಯಲ್ಲಿ ಕೋಟ್ಯಂತರ ರೂ.ಗಳಿವೆ. ಸರಕಾರಿ ನೌಕರರು ದೇಣಿಗೆಗಳನ್ನು ನೀಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ದೇಣಿಗೆಗಳನ್ನು ಪಿಎಂ ಕೇರ್ಸ್ ಗೆ ಜಮಾ ಆಗುವಂತೆ ಮಾಡಲಾಗುತ್ತಿದೆ. ಆದರೆ ನಿಧಿಯಲ್ಲಿ ಎಷ್ಟು ಹಣವಿದೆ? ನಮಗೆ ಗೊತ್ತಿಲ್ಲ. ಅದನ್ನು ಹೇಗೆ ವ್ಯಯಿಸಲಾಗಿದೆ? ನಮಗೆ ಗೊತ್ತಿಲ್ಲ. ಕೋವಿಡ್ ಬಿಕ್ಕಟ್ಟನ್ನು ಎದುರಿಸಲು, ವೆಂಟಿಲೇಟರ್ಗಳನ್ನು ಖರೀದಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ನಮಗೆ ಹೇಳಲಾಗಿತ್ತು. ನಿಜವಾಗಿಯೂ ಆಗಿರುವುದೇನು? ನಮಗೆ ಗೊತ್ತಿಲ್ಲ’ ಎಂದು ಹೇಳಿದ ನ್ಯಾ.ಲೋಕೂರ್, ‘ಪಿಎಂ ಕೇರ್ಸ್ ವೆಬ್ಸೈಟ್ನಲ್ಲಿ 28-03-2020ರಿಂದ 31-03-2020ರ ಅವಧಿಯ ಲೆಕ್ಕ ಪರೀಶೋಧನೆ ವರದಿಯನ್ನು ನೋಡಬಹುದು. ನಾಲ್ಕು ದಿನಗಳಲ್ಲಿ 3,000 ಕೋ.ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಅದು ಹೇಳುತ್ತಿದೆ. ಅದನ್ನು ಸರಾಸರಿಯಾಗಿ ತೆಗೆದುಕೊಂಡರೆ ನಾವು ಸಾವಿರಾರು ಕೋಟಿ ರೂ.ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಆ ಹಣ ಎಲ್ಲಿಗೆ ಹೊಗುತ್ತಿದೆ? ನಮಗೆ ಗೊತ್ತಿಲ್ಲ’ ಎಂದರು.

2020-21ನೇ ಅವಧಿಯ ಲೆಕ್ಕ ಪರಿಶೋಧನೆ ವರದಿಯು ಇನ್ನೂ ಸಿದ್ಧಗೊಂಡಿಲ್ಲ. ಒಂದು ವರ್ಷ ಈಗಾಗಲೇ ಕಳೆದಿದೆ, ಆದರೆ ಲೆಕ್ಕ ಪರಿಶೋಧನೆ ವರದಿಯ ಬಗ್ಗೆ ಯಾರಿಗೂ ಸುಳಿವಿಲ್ಲ ಎಂದರು.

ಕೋವಿಡ್ ತುರ್ತು ಸ್ಥಿತಿಯನ್ನು ಎದುರಿಸಲು ಚ್ಯಾರಿಟೇಬಲ್ ಟ್ರಸ್ಟ್ ಆಗಿ ಸ್ಥಾಪಿಸಲಾದ ಪಿಎಂ ಕೇಸ್ ನಿಧಿಯ ಕುರಿತು ಮಾಹಿತಿ ಕೋರಿದ್ದ ಆರ್ಟಿಐ ಅರ್ಜಿಗಳನ್ನು ಪ್ರಧಾನಿ ಕಚೇರಿಯು ತಿರಸ್ಕರಿಸಿದ್ದನ್ನು ಮತ್ತು ಅದು ಆರ್ಟಿಐ ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪಿಎಂ ಕೇರ್ಸ್ ನಿಧಿಯ ಕುರಿತು ಮಾಹಿತಿ ಬಹಿರಂಗವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ನಡೆಸುತ್ತಿದೆ.

ಮಾಹಿತಿಯನ್ನು ಮುಕ್ತವಾಗಿ ಲಭ್ಯವಾಗಿಸುವುದರ ಮಹತ್ವದ ಕುರಿತೂ ಮಾತನಾಡಿದ ನ್ಯಾ.ಲೋಕೂರ್, ಪ್ರಜಾಸತ್ತಾತ್ಮಕ ಗಣರಾಜ್ಯವು ಸರಿಯಾಗಿ ಕಾರ್ಯ ನಿರ್ವಹಿಸಲು ಮಾಹಿತಿಗಳು ಮುಖ್ಯವಾಗಿವೆ. ಒಳ್ಳೆಯ ಆಡಳಿತ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೊಂದಿರುವುದು ಇದರ ಹಿಂದಿನ ಪರಿಕಲ್ಪನೆಯಾಗಿದೆ. ನಾವು ಮಾಹಿತಿಗಾಗಿ ಸರಕಾರವನ್ನು ಕೇಳಬೇಕಿಲ್ಲ. ಆರ್ಟಿಐ ಕಾಯ್ದೆಯ ಕಲಂ 4ರಡಿ ಸರಕಾರವು ತಾನಾಗಿಯೇ ಮಾಹಿತಿಗಳನ್ನು ಒದಗಿಸಬೇಕು ಎಂದರು.

 

Source:

Related Stories

ಟಾಪ್-ನ್ಯೂಸ್

ಯುದ್ಧ ಪೀಡಿತ ‘ಉಕ್ರೇನ್’ನಲ್ಲಿ ಸಿಲುಕಿದ ಮೈಸೂರಿನ ವಿದ್ಯಾರ್ಥಿಗಳು

February 25, 2022
ಟಾಪ್-ನ್ಯೂಸ್

6 ವರ್ಷಗಳಿಂದ ಕುತ್ತಿಗೆಗೆ ಸಿಕ್ಕಿಸಿಕೊಂಡಿದ್ದ ಟೈರ್​ ಬಂಧನದಲ್ಲಿದ್ದ ಮತ್ತೊಂದು ಮೊಸಳೆಗೆ ಸಿಕ್ತು ಮುಕ್ತಿ

February 10, 2022
ಟಾಪ್-ನ್ಯೂಸ್

ತನ್ನ ಪುಸ್ತಕದಲ್ಲಿ ಹಿಜಾಬ್ ವಿರೋಧಿಸಿದ್ದ ಪಾಕ್ ಮೂಲದ ಮಲಾಲಾ.. ಇಂದು ಉಲ್ಟಾ ಹೊಡೆದ್ರು

February 9, 2022
ದೇಶ

STATUE OF EQUALITY: ಸಮಾನತೆ ಪ್ರತಿಮೆ ಉದ್ಘಾಟನೆ ಮಾಡಿದ ಮೋದಿ

February 5, 2022
Next Post

ಅರಮನೆಯಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ

Discussion about this post

Recent News

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6

Follow us

  • Trending
  • Comments
  • Latest

ತೆಲುಗು ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು..

November 3, 2021

ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್

November 22, 2021

ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

November 21, 2021

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

November 27, 2021

Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ

0

WhatsApp: ಆಗಸ್ಟ್​ನಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನ ಬ್ಯಾನ್​ ಮಾಡಿದ ವಾಟ್ಸ್ಆ್ಯಪ್!

0

ನಾಗ ಚೈತನ್ಯರ ಅತಿಯಾದ ಪೊಸೆಸಿವ್​ನೆಸ್​​ನಿಂದಲೇ ಸಮಂತಾ ಡಿವೋರ್ಸ್​​ಗೆ ಮುಂದಾದರಾ? ಅಸಲಿ ಕಾರಣವೇನು?

0

Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

0

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
  • About us
  • Advertise with us
  • Reach us
Call us: 0821-4266061

Copyright © 2021 UVS Media Private Limited.

No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos

Copyright © 2021 UVS Media Private Limited.

error: